ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

December 11, 2010

ಮನದಾಳದ ನೋವು

Filed under: ಅರಿಯದೇ ಬಂದದ್ದು — kavya gowda @ 10:32 am

ಏಷ್ಟೋ ಹಾಳೆಗಳ ಮೇಲೆ
ಪದಗಳು ಸೇರಿ ನರ್ತನ
ಮಾಡಿ ಅರಳಿರಿವುದೊಂದು ಕತೆ,
ಆದ ಕೂಡಿಸಿ ಓದುವೆಯಾದರೆ
ನಾಯಕ ನೀನಾಗಿರುವೆ
ಕಳನಾಯಕಿ ನಾನಾಗಿರುವೆ
ನಿನ್ನ ಯೋಚನೆಗೆ.
ನಿನಗೆ ಸಂತಸವಿಲ್ಲ
ಎನಗೆ ಬೇಸರ ತಪ್ಪಿದಲ್ಲ
ತಪ್ಪುಗಳು ಇಬ್ಬರಲಿದ್ದರೂ
ನಾ ಹೇಳಿದ್ದು ನಿನಗೆ ಬೇಡ
ನೀ ಹೇಳುವುದು ನನಗೂ ಬೇಡ.
‘ಪ್ರೀತಿ’ ಇಬ್ಬರಲೂ
ತುಳುಕಿ ತೂರಾಡಿದೆಯಾದರೂ
ಸನಿಹ ಇಬ್ಬರಿಗೂ ಬೇಡವಾಗಿದೆ.
ನನ್ನ ಮಾತು ನಿನಗೆ ಹಿಡಿಸದು
ನಿನ್ನ ಮಾತು ನನಗೂ ಹಿಡಿಸದು
ಆದರೂ ನಿಲ್ಲದ್ದು ವಾದ
ನಾ ಸೋಲಲಾರೆ
ನೀ ಸೋಲಬಯಸಲಾರೆ
ಕೊನೆಗೆ ತುಕ್ಕು ಹಿಡಿದದ್ದು
ಒಂದಾಗಬೇಕಾದ ಸಂಬಂಧ.
ನೀನು ಪ್ರೀತಿಸಿದ್ದೆ
ನಾನು ಪ್ರೀತಿಸಿರುವೆ
ಎಲ್ಲರೂ ಒಪ್ಪಿದ್ದು
ಆದರೂ ಒಂದಾಗಲಾಗದ್ದು
ವಿಪರ್ಯಾಸವಾದರೂ
ಬ್ರಹ್ಮ ಗೀಚಿದ್ದು
ದೇವರು ಬಯಸಿದ್ದು.
ಇದ ನೀ ಒಪ್ಪಲಾರೆ
ನಾನು ಒಪ್ಪಿಕೊಳ್ಳಲಾರೆ
ಆದರೆ ಎಲ್ಲಿಯವರೆಗೆ
ಸಮಯ ನಿಲ್ಲುವುದೇ,
ನಾನು ನೀನು ಅಲ್ಲ
ನನ್ನದು ನಿನ್ನದೂ ಆಗಲಿಲ್ಲ
ನಾನೊಂದು ತೀರ
ನೀನೊಂದು ತೀರ
ಇಬ್ಬರದೂ ವಿರಹಾ
ಆದರೂ ಜೀವನವೊಂದು
ನಿಲ್ಲದ ಪ್ರಯಾಣ.

2 Comments »

  1. ಬ್ರಹ್ಮ ಗೀಚಿದ್ದು antha summanagade sambhandha saripadisalu prathyana pattare manadalada novu mayavathugthe alwa!!!

    Comment by DGM — February 21, 2011 @ 1:56 pm | Reply

  2. nice..

    visit my blog @ http://ragat-paradise.blogspot.com

    RAGHU

    Comment by RAGHU — May 15, 2011 @ 1:29 pm | Reply


RSS feed for comments on this post. TrackBack URI

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Theme: Rubric. Blog at WordPress.com.

Follow

Get every new post delivered to your Inbox.