ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

August 18, 2009

ಕಲ್ಪನೆ

ಹಕ್ಕಿಯಂತೆ ಹಾರುತಿರುವೆ
ಮೇಲಕ್ಕಲ್ಲ ಕೆಳಕ್ಕೆ
ಕತ್ತಲು ಆವರಿಸಿರುವುದಾದರೂ
ಅರಿವಾಗುತಿದೆ
ಪಾತಾಳದೊಳಗೆ ಬೀಳುವಿಕೆ.
ಮೇಲೆ ಮೇಲೆ ಹಾರುವ
ಪ್ರಯತ್ನ ನನ್ನದಾದರೂ
ಸಾಧ್ಯವಾಗದ
ಅಸಹಾಯಕತೆ.
ಕೂಗಿದ್ದೂ ಉಂಟು
ಆದರದು ಕೇಳಿಸಿದ್ದು
ಯಾರಿಗಿಲ್ಲ,ಬದಲಿಗೆ
ಪ್ರತಿಧ್ವನಿಯಾಗಿ
ಅಪ್ಪಳಿಸಿದ್ದು ನನ್ನ ಕಿವಿಗೆ.
ನಿಲ್ಲಲು ನೆಲೆ ಬೇಕಿತ್ತು
ಹುಡುಕಾಟದಲಿ ಸಿಗದೆ
ಮನಸ್ಸಿಗಾದದ್ದು ನಿರಾಸೆ
ಆದರೂ, ಬಿಡದ ಆಶಾವಾದಿತ್ವ
ಕೊನೆಯಿಲ್ಲದ ಮೊದಲಿಲ್ಲ
ಸಿಕ್ಕೇ ಸಿಕ್ಕಿತೆಂಬ ಛಲ.
ಬೇಕಾಗಿದ್ದು ಗಟ್ಟಿ ಹೃದಯ
ಜೊತೆಗಿದ್ದದ್ದು ಧೈರ್ಯ
ಆದರೂ, ಕಣ್ಣಲ್ಲಿದ್ದದ್ದು ನೀರು
ಯಾರಿಗೆ ಕಾಣಿಸೀತು
ಕೆನ್ನೆಗಳ ಮೇಲಿಂದ ಜಾರಿ
ಎಲ್ಲೋ ಬಿದ್ದು ಮರೆಯಾಗಿತ್ತು.
ಹಸಿದ ಹೊಟ್ಟೆಯಾದರೂ
ಕೋಪಕ್ಕೇನೂ ಕಮ್ಮಿಯಿಲ್ಲ
ಕೂಗಾಡಿಬಿಡಬೇಕು
ಕೇಳಲು ಯಾರಿರುವರಲ್ಲಿ
ಉಸಿರಿಗೂ ಮೌನ
ಜೊತೆಗಾರರಿಲ್ಲದ ಒಂಟಿ.
ಎಲ್ಲೂ ನಿಲ್ಲದೇ

ಕೊನೆಯನೂ ತಿಳಿಯದೆ

ಸಾಗುತಿದೆ ಪಯಣ.

ಕ್ಷಣದಲೇ

ಮರಳುಗಾಡಿನಲಿ ಸಿಕ್ಕ
ಗುಟುಕು ನೀರಿನ ಅನುಭವ
ಏನೋ ಸಂತಸ
ಹೊಸತೊಂದು ಅನುಭವ
ಎಂದೂ ಮರೆಯಲಾಗದ ಸ್ಪರ್ಶ
ಕೊನೆಯವರೆಗೂ
ಜೊತೆಗಿರುವೆನೆಂಬ ಭರವಸೆ
ಮನಸು ಕುಣಿದು ಕುಪ್ಪಳಿಸಿತ್ತು
ಮುಚ್ಚಿದ ಕಣ್ಣು ತೆರೆದೆ
ಎದುರಲ್ಲಿ ನೀನು
ಪ್ರಶ್ನೆಯ ಗೆರೆಗಳಿಂದ
ತುಂಬಿರುವ ನಿನ್ನ ಮುಖ
ನೆನಪಿಸಿದ್ದು
ನಾ ಕಂಡ ಕಲ್ಪನೆಯ
ಲೋಕವನ್ನ.

No Comments Yet »

No comments yet.

RSS feed for comments on this post. TrackBack URI

Leave a comment

Blog at WordPress.com.