ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

December 20, 2008

ಜೀವನ

ಚರ್ಮದ ಗೋಡೆಯೊಳಗೆ
ರಕ್ತದ ಸರೋವರದಲಿ
ನರ ನಾಡಿಗಳ ಬೇರಿನಲಿ
ಚಿಕ್ಕದಾದ ಮಾಂಸ
ಮುದ್ದೆಯಿಂದ
ಆಕೃತಿಯೊಂದು
ಆಕಾರಗೊಂಡು
ನವ ಮಾಸದವರೆಗೆ
ಬದುಕ ಮಾಡುತಿರಲು
ಬೆಳೆದ ಬೆಳವಣಿಗೆಗೆ
ಜಾಗ ಸಾಲದೇ
ಉಸಿರು ಕಟ್ಟುತಿರಲು
ಗಾಳಿ ಬೆಳಕುಗಳ
ಪ್ರಪಂಚಕ್ಕೆ, ನಾ
ಬಯಸದೇ ಹೊರಬಂದು
ನಿನ್ನೆ , ಇಂದು , ನಾಳೆಗಳನು
ಲೆಕ್ಕ ಹಾಕುತ್ತಾ
ಬಾಲ್ಯ , ಯೌವನ
ಮುಪ್ಪುಗಳ ಹಾದಿಯಲಿ
ಬೇಕು ಬೇಡಗಳ ನಡುವೆ
ಹೆಜ್ಜೆ ಇಡುತಿರಲು
ಬದುಕು ಸಾಕೆನಿಸಿದಾಗ
ಉಸಿರು ನಿಂತು
ಮಣ್ಣಿನಲಿ ಮರೆಯಾಗುವುದು
ನಮ್ಮದಲ್ಲದ ನಮ್ಮ ಜೀವ.

No Comments Yet »

No comments yet.

RSS feed for comments on this post. TrackBack URI

Leave a comment

Blog at WordPress.com.