ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯ

June 10, 2009

ಪ್ರೀತಿಸಿದವನು ದೂರಾಗಿರಲು (ನೋವು -ದುಃಖ)

Filed under: ಅರಿಯದೇ ಬಂದದ್ದು — kavya gowda @ 10:01 am

ಬದುಕು ಬೇಸರ ,ಜೀವನ ಕಷ್ಟ
ನೋವಾಗಿದ್ದು ಹೃದಯಕ್ಕೆ
ಸಂಕಟವಾಗಿರುವುದು ಮನಸ್ಸಿಗೆ.
ಮಾತು ಮೌನವಾಗಿರುವುದು
ಚಿಂತೆ ಬೇಡದಿರುವುದು
ಯಾತನೆ ಬೇಸರ ಅವನಿಗಿಲ್ಲ
ಅರ್ಥವಿಲ್ಲದೇ ನಾ ಪಡುತಿರುವೆ.
ಪ್ರೀತಿ ಅಮರ ಸತ್ಯ
ಆದರದು ನನಗಲ್ಲ,
ಅವನನ್ನೇ ಪ್ರೀತಿಸಿದ್ದು
ವಿಪರ್ಯಾಸ ಅವನು ಸಿಗದೆ
ಬೇರೆಯವರವಾನಾಗಿದ್ದು.
ಹುಡುಕಾಟ ನನ್ನದು
ಸಿಕ್ಕಿದ್ದು ಅವನಲ್ಲ ,
ಹಣೆಬರಹ ಬ್ರಹ್ಮನದು
ಅದರಲ್ಲಿ ಅವನ ಹೆಸರಿಲ್ಲ
ಹೋದ ಜನುಮದ ಋಣ
ಈ ಜನ್ಮದ ನಮ್ಮಿಬ್ಬರ ಮಿಲನ.
ಅವನಿಗಾಗಿ ನಾನು
ಹೇಳಲಿಲ್ಲ ಅವನೆಂದೂ
ಕಟ್ಟಿಕೊಂಡೆ ಕನಸುಗಳ
ಬಿಟ್ಟು ಹೋಗಿರುವ ನೆನಪುಗಳ
ಮೋಸ ಅವ ಮಾಡಿದ್ದಲ್ಲ
ನಾ ಹೋಗಿದ್ದು.
ಬದುಕುವ ಮನಸಿಲ್ಲ
ಸಾವು ಬರುತಿಲ್ಲ ಸನಿಹ
ಜೀವನ ಸಾಕಾಗಿದೆ
ಅಂತ್ಯ ನನ್ನಲಿಲ್ಲ.
ಮಾಡಿರುವೆನೇನೋ ಪಾಪ
ಪದುತಿರುವುದದಕೆ ಪ್ರಾಯಶ್ಚಿತ
ಕಾಯುತಿರುವೆ ಕೊನೆಯ ಉಸಿರಿಗೆ
ಸಿಗದೆ ಆಗುತಿದೆ ನೋವು ವ್ಯಥೆ.

June 2, 2009

ನಾನೆಂಬ ಮೂರ್ಖ

Filed under: ಅರಿಯದೇ ಬಂದದ್ದು — kavya gowda @ 7:18 am

ನಾನು ನನದಲ್ಲ

ನನದು ಏನಿಲ್ಲ

ನಾನು ನಾನೆಂಬುವ

ಹುಡುಕಾಟದಲಿ ಅರಿಯುವುದು

ನಾನೆಂಬುದೊಂದು

ಇನ್ನೊಂದರಿಂದ,

ಇನ್ನೊಂದಿಲ್ಲದೇ ನಾನಿಲ್ಲವೆಂದು.

ಹಣತೆ ಇಲ್ಲದೇ ಬೆಳಕಿಲ್ಲ

ಎಣ್ಣೆ ಇರದ ಹಣತೆ ಇಲ್ಲ

ಹಣತೆ , ಎಣ್ಣೆ ಇದ್ದರೆ ಏನಂತೆ

ಬತ್ತಿ ಇಲ್ಲದೇ ಬೆಳಕು

ಮೂಡುವುದೇ ಇಲ್ಲ.

ಗಿಡವಾಗದು ಮೊಳಕೆ

ನೆಲವಿಲ್ಲದೇ,,,

ಮರವಾಗದು ಗಿಡ

ಮಳೆಯಿಲ್ಲದೆ ,ನೀರಿಲ್ಲದೇ.

ಎಲ್ಲಿಂದ ಎಲ್ಲಿಗೋ

ಯಾರಿಂದ ಎಲ್ಲಿಗೋ

ಎಲ್ಲಿಂದ ಯಾರಿಗೋ

ಹುಡುಕ ಹೊರಟರೆ

ಯಾವುದರಿಂದಲೋ

ಯಾವುದಕ್ಕೋ ಒಂದು

ಬಿಡಿಸಲಾರದ ನಂಟು.

ಹುಟ್ಟು ನನದಲ್ಲ

ಸಾವು ನನದಲ್ಲ 

ಗಾಳಿಯಿಲ್ಲದೇ ಉಸಿರಿಲ್ಲ

ಉಸಿರಿಲ್ಲದ ಜೀವವಿಲ್ಲ,

ಎಲ್ಲಿಯೂ ಏನೂ ನನದಲ್ಲಾ

ಮತ್ತೇಕೆ ನಾನು ನನದು

ನಾನೆಂಬ ಮೂರ್ಖ.

May 27, 2009

ಶೂನ್ಯ.

Filed under: ಅರಿಯದೇ ಬಂದದ್ದು — kavya gowda @ 12:23 pm

ಸೃಷ್ಟಿಕರ್ತ ದೇವ

ಸೃಷ್ಟಿಸಿದ್ದೇನೂ ಇಲ್ಲ

ಸೃಷ್ಟಿಸಿದ್ದೆಲ್ಲ ಬರೀ ಶೂನ್ಯ.

ಸೃಷ್ಟಿಸಿದನು ಭೂಮಿಯ

ಅದರಾಕಾರವೊಂದು ಶೂನ್ಯ

ಆಗಸವೂ ಶೂನ್ಯ

ಸೂರ್ಯ ಚಂದ್ರರೂ ಶೂನ್ಯ

ಕಾಲಚಕ್ರವೂ ಶೂನ್ಯ.

ಒಂದಕ್ಕೊಂದು ಕೂಡಿದ

 ಕೂಡಿದ್ದನ್ನು ಕಳೆದ

 ಗುಣಿಸಿ ಭಾಗಿಸಿ ಕೊನೆಗವನು

 ಉಳಿಸಿದ್ದು ಬರೀ ಶೂನ್ಯ.

ನೀನೆಂಬುದು ಏನಿಲ್ಲ

ನಾನೆಂಬುದು ಏನೇನೂ ಇಲ್ಲ

ನಾನು ನೀನು ಇರದೆ

ಬದುಕೆಂಬುದೊಂದು ಶೂನ್ಯ.

ಜನಿಸುವಾಗ ಏನೂ ತಂದಿಲ್ಲ

ಸತ್ತಾಗ ಕೊಂಡುಯ್ಯುವುದು ಏನಿಲ್ಲ

 ಕೊಟ್ಟಿದ್ದು ಏನಿಲ್ಲ

ಪಡೆದದ್ದೂ ಏನೂ ಇಲ್ಲ

ಎಲ್ಲ ಇದ್ದೂ ಏನೂ ಏನಿಲ್ಲದ

 ಈ ಶೂನ್ಯ ಜಗತ್ತಿನಲಿ

ಜೀವನವೊಂದು ಬರೀ ಶೂನ್ಯ.

January 12, 2009

ಬೇಸರ

ಕನಸಿನಲಿ ಬಂದ ರಾಜಕುಮಾರ 

ಬಂದಿರಲು ಸನಿಹ ಬೆಚ್ಚಿ ಬೆದರಿ

ನೋಡಿದ್ದೆ ಕುತೂಹಲದಲಿ

ನನ್ನ ಆತಂಕವನರಿತರೂ

ನನ್ನನುಮತಿಯನೂ ಕೇಳದೇ

ಮುಂಗುರುಳ ಸರಿಸಿ

ಚುಂಭಿಸಿದ್ದ ತುಟಿಗಳಿಗೆ

ರೂಪದಲಿ ಮನ್ಮಥನವ

ರತಿಯಾಗಿದ್ದೆ ನಾ ಕೆಲ ಸಮಯ

ನನ್ನನಾನೇ ಮರೆತು

ಬಿಟ್ಟ ಕಂಗಳ ಮುಚ್ಚದೆ

ನೋಡಿದ್ದೆ ಅವನಂದವ

ನನಗರಿವ ಕೊಡದೇ

ಸೋತಿತ್ತು ಮನ ಅವನಿಗೆ.

 ಒಮ್ಮೆ ಅವನೆದೆಗೆಒರಗಿ

ಹೃದಯ ಬಡಿತವ ಕೇಳುವಾಸೆ

ನನ್ನ ಮನದ ಮಾತ

ಅರಿತವನಂತೆ ಬರಸೆಳೆದು
ಬಾಹುವಿನಲಿ  ಅಪ್ಪಿ

ಮುತ್ತನಿತ್ತಿದ್ದ ಹಣೆಗೆ

ಎಂತಹ ರಸಿಕ ,ಮನಸೋತು

ಒರಗಿದ್ದೆ ಅವನೆದೆಗೆ

ಅವನೆದೆಯ ಬಿಸಿ ಉಸಿರ

ಡವಡವದಲಿ ನನ್ನೆದೆಯ ಬಡಿತ

ಜೋರಾಗುತಿರಲು

ಮನ ಎಚ್ಚರಿಸಿ ಬುದ್ಡಿ ಹೇಳಿ

ಬಿಡಿಸಿಕೊಳ್ಳ ಹೊರಟವಳಾ

ಕಿವಿಯಲ್ಲಿ ಪಿಸುರಿದ್ದ

ಹೋಗದಿರು ನಲ್ಲೇ ನನ್ನಿಂದ ದೂರ

ಪ್ರೀತಿಸಿರುವೆ ನಾನಿನ್ನ ಮನಸಿನಲೆ.

 ಮನಸಾರೆ ಮುದ್ದಿಸಿದೆ 

ಹೃದಯದಲೆ ಪೂಜಿಸಿದೆ

ಪ್ರೀತಿಸಿದೆ ,ಪ್ರೇಮಿಸಿದೆ

ಅವನಿಲ್ಲದೇ ನಾನಿಲ್ಲವಾಗಿ

ನನ್ನೇ ನಾ ಮರೆತಿರಲು

ಕಾಣದೆ ಮರೆಯಾಗಿದ್ದ
ಹೇಳದೇ ಕೇಳದೇ.

ಹುಡುಕಿದೆ

ದಮಯಂತಿ  ಮರೆಯಾದ ನಳನ ಹುಡುಕಿದಂತೆ,

ಕೂಗಿದೆ

ಗಂಟಲು ಕಿತ್ತು ಬರುವವರೆಗೆ,

ರೋಧಿಸಿದೆ

ಹೃದಯ ಬಡಿತ ನಿಲ್ಲಿಸುವಂತೆ

ಅತ್ತಿದ್ದೆ ಕಣ್ಣಲ್ಲಿ  ರಕ್ತ ಸೋರುವಂತೆ.

 
ಬೇಸರ ಗೊಂಡಿತ್ತು ಮನಸು

ಬಾರವಾಗಿತ್ತು ಹೃದಯ

ಸೂರ್ಯನ ಕಿರಣದ ಬೆಳಕು ಮೊಗವ

ತಗುಲಿ ಕನಸ ಎಚ್ಚರಿಸಿದರೂ

ಅಳುತಲೆ ಇದ್ದೇ ಮರೆಯಾದ

ರಾಜಕುಮಾರನ ನೆನಪಿನಲೆ.

January 3, 2009

ಅಸಾಧ್ಯ ಪ್ರಯತ್ನ

ಗಡಿಯಾರದ ಮುಳ್ಳುಗಳು
ತಿರುಗುತಿವೆ
ಚಕ್ರದಂತೆ
ಸಮಯಕ್ಕೆ ಇಲ್ಲ
ಕೊನೆಯೆಂಬ ನಿಲ್ದಾಣ.
ಪ್ರಯತ್ನಿಸುತಿರುವೆ
ಕಟ್ಟಿ ಹಾಕಬೇಕೆಂದು
 ದಿನವ
ಜಂಬದಲಿ ಅಡ್ಡ ಬರುತಿಹುದು
ನನ್ನನ್ನೇ ಅಣಕಿಸಿ ನಾಳೆ.
ಏನ ಮಾಡಿದೆ ನಿನ್ನೆ
ಏನ ಮಾಡಲಿ ನಾಳೆ
ಎನ್ನುವುದರಲೇ
ದಿನವು
ಮುಗಿದು ಬಂದು ನಿಲ್ಲುವುದು
ಮಗದೊಂದು ದಿನವು
ದಿನಕದು ನಾಳೆಯು.
ಇಂದು ಗಳಿಸುವುದು
ನಾಳೆಗಾಗಿಯಾದರೆ
ನಾಳೆಯಲಿ ಗಳಿಸುವುದು
ಅಂದಿಗಾಗಿ ಅಲ್ಲಾ
ಮಗದೊಂದು ನಾಳೆಗಾಗಿ.
ದಿನದಿನವು ಓಡುತಿರಲು
ತಿರುಗಿ ನೋಡದೇ
ನಿನ್ನೆ ಇಂದನು
ಹಗ್ಗ ಬಿಚ್ಚಿ ಹುಚ್ಚು
ಕುದುರೆಯ ಹಿಡಿಯುವಂತೆ
ಸಾಧ್ಯವಿಲ್ಲದ ಅಸಾಧ್ಯ
ಕಾಲವನು ಕಟ್ಟಿಹಾಕುವ
ನನ್ನ ಪ್ರಯತ್ನ.

ಡಿಸೆಂಬರ್ 29, 2008

ನನ್ನ ನಲ್ಲ

ನನ್ನ ನಿದ್ರೆಯೆಲ್ಲ
ಅವನಿಗೆ ಮೀಸಲೆಂಬಂತೆ
ನಾ ಕಣ್ಣು ಮುಚ್ಚಿದೊಡನೆಯೇ
ಚೋರನಂತೆ ಬಂದು
ಹಿಂದೆ ಮುಂದೆ
ಸುತ್ತ ಮುತ್ತಾ
ಬಿಡದೆ ತಿರುಗುತಿದ್ದವನಿಗೆ
ಹುಚ್ಚಿವನಿಗೆಂದು ಬೈದರೂ
ಕೇಳದವನಂತೆ ನಟಿಸುತಿದ್ದವ,
ಎದುರು ಬಂದರೆ
ಬಿಟ್ಟ ಕಣ್ಣ ಮುಚ್ಚದೆ
ಇನ್ನೇನು  ನನ್ನ
ನುಂಗಿ ಬಿಡುವಂತೆ ನೋಡಿ
ನಾನು ನಾಚಿ 
ಕರಗುವಂತೆ ಮಾಡುತಿದ್ದವ,
ಸನಿಹ ಬಂದು
ತೋಳಲಿ ನನ್ನ ಬಳಸಿ
ಹಣೆಗೆ ಮುತ್ತನಿತ್ತು 
ಮುದ್ದಿಸಿ ಪ್ರೀತಿಸುತಿದ್ದವ
ನಾ ಕಣ್ಣ ಬಿಟ್ಟವೊಡನೆ
ಬೇಸರಗೊಂಡವನಂತೆ
ಹಗಲಿನಲಿ ನೀ ನನ್ನವಳಲ್ಲ
ಮತ್ತೆ ರಾತ್ರಿ ಬರುವೆನೆಂದು
ಮರೆಯಾಗಿ ಹೋದ
ನನ್ನ  ನಲ್ಲ
ನನ್ನ ಕನಸ ರಾಜಕುಮಾರ

ಡಿಸೆಂಬರ್ 20, 2008

ಜೀವನ

ಚರ್ಮದ ಗೋಡೆಯೊಳಗೆ
ರಕ್ತದ ಸರೋವರದಲಿ
ನರ ನಾಡಿಗಳ ಬೇರಿನಲಿ
ಚಿಕ್ಕದಾದ ಮಾಂಸ
ಮುದ್ದೆಯಿಂದ
ಆಕೃತಿಯೊಂದು
ಆಕಾರಗೊಂಡು
ನವ ಮಾಸದವರೆಗೆ
ಬದುಕ ಮಾಡುತಿರಲು
ಬೆಳೆದ ಬೆಳವಣಿಗೆಗೆ
ಜಾಗ ಸಾಲದೇ
ಉಸಿರು ಕಟ್ಟುತಿರಲು
ಗಾಳಿ ಬೆಳಕುಗಳ
ಪ್ರಪಂಚಕ್ಕೆ, ನಾ
ಬಯಸದೇ ಹೊರಬಂದು
ನಿನ್ನೆ , ಇಂದು , ನಾಳೆಗಳನು
ಲೆಕ್ಕ ಹಾಕುತ್ತಾ
ಬಾಲ್ಯ , ಯೌವನ
ಮುಪ್ಪುಗಳ ಹಾದಿಯಲಿ
ಬೇಕು ಬೇಡಗಳ ನಡುವೆ
ಹೆಜ್ಜೆ ಇಡುತಿರಲು
ಬದುಕು ಸಾಕೆನಿಸಿದಾಗ
ಉಸಿರು ನಿಂತು
ಮಣ್ಣಿನಲಿ ಮರೆಯಾಗುವುದು
ನಮ್ಮದಲ್ಲದ ನಮ್ಮ ಜೀವ.

October 14, 2008

ನನ್ನ ಹುಡುಗ

Filed under: ಅರಿಯದೇ ಬಂದದ್ದು — kavya gowda @ 9:31 am

ಮುಂಜಾನೆಯನೆ ಕಾಯುತಿರುವಂತೆ
ಓಡೋಡಿ ಬಂದು
ತಡವಾಗಿದ್ದರೆ  ಅಮ್ಮನಿಗೂ ಕಾಯದೇ
ಪುಸ್ತಕವ ಕೈಚೀಲದಲಿ ತುಂಬಿ
ನನ್ನ ಕೈ ಹಿಡಿದು
ಹಿಂದಿನ ದಿನ ಶಾಲೆಯಲಿ
ಕಲಿಸಿಕೊಟ್ಟ ಪಾಠವನು
ಉರು ಹೊಡೆಯುತ್ತಾ
ದಾರಿಯಲಿ ಹೋಗುವಾಗ
ನಾ ಕಲ್ಲ ಎಡವಿ ಜಾರಿ ಬಿದ್ದರೆ
ತಾನು ಅಯ್ಯೋ ಎನ್ನುತ್ತಾ
ಕಣ್ಣೀರಾ ಒರೆಸಿ ಪ್ರೀತಿಯಲಿ
ಕರೆದೊಯ್ಯುತಿದ್ದ ಜೊತೆಗಾರ
ನನ್ನ ಹುಡುಗ ,

ಗೆಳತಿಯರೊಡನೆ ಕುಂಟೆಬಿಲ್ಲೆ
ಆಡುತಿರುವಾಗ ಹಿಂದಿನಿಂದ
ಬಂದು ಜುಟ್ಟುಎಳೆದು
ಬಿಲ್ಲೆಯನು ಕದ್ದು ಇಟ್ಟು
ಕೊಡದೇ ಸತಾಯಿಸಿ
ಅಳುವಂತೆ ಮಾಡಿ ನಗುತಿದ್ದವ
ನನ್ನ ಕಣ್ಣಲಿ ಕಣ್ಣೀರಾ
ಕಂಡ ಒಡನೆ ದುಃಖ ಪಡುತಿದ್ದ
ನನ್ನ ಗೆಳೆಯ
ನನ್ನ ಹುಡುಗ ,

ಮೈನೆರೆದು ಮೂಲೆಯಲಿ
ಯಾರಿಗೂ ಮುಖ ತೋರದೇ
ನಾಚಿಕೆಯಲಿ  ಕುಳಿತೀರಲು
ಅರಿಶಿನ  ಹಚ್ಚಲು ಬಂದ
ಅಮ್ಮನ  ಸೆರಗಿನ ಹಿಂದಿನಲಿ
ಬಂದು ಯಾರಿಗೂ ಕಾಣದಂತೆ
ಚಿಗುರು ಮೀಸೆಯಡಿಯಲಿ
ನಕ್ಕೂ ಕಣ್ಣು ಹೊಡೆದು
ಓಡಿ ಹೋಗಿದ್ದ ತುಂಟ
ನನ್ನ ಹುಡುಗ,

ಗೆಳೆಯರೆಂಬ ಸಲುಗೆಯಲಿ
ಮನೆಯಲ್ಲಿ ಅನುಮಾನವಿಲ್ಲದಿರಲು
ಹುಚ್ಚುಖೊಡಿ ಮನಸ್ಸು
ಕನ್ನಡಿ ಮುಂದೋದಿಷ್ಟು
ನನ್ನ ನಾ ನೋಡಿ
ಸೀರೆ ಸೆರಗ ಸರಿ ಮಾಡುತಿರಲು
ಕನ್ನಡಿ ಒಳಗಿಂದ ನನ್ನ
ಸೌಂದರ್ಯ ಕದ್ದು ನೋಡಿ
ನನ್ನ ಮನಸ ಕೆಡಿಸಿ
ಪ್ರೀತಿಸುವಂತೆ ಮಾಡಿದ್ದ ನಲ್ಲ
ನನ್ನ ಹುಡುಗ,

ಯಾರು ಇಲ್ಲದಿರಲು
ಕಳ್ಳ ಬೆಕ್ಕಿನಂತೆ ಕದ್ದು ಬಂದು
ಅಪ್ಪಿಕೊಂಡರೆ, ಬೆದರಿ
ಕಿರು ಹೊರಟಾಗ
ತುಟಿಗೆ ತುಟಿಯನಿಟ್ಟು
ಉಸಿರುಕಟ್ಟುವಂತೆ ಮುತ್ತನಿತ್ತು
ಮನಸಿನಲಿ ಬಾವನೆಗಳ
ಅಲೆಗಳನು ಮೂಡಿಸಿದ್ದ
ನನ್ನ ಹುಡುಗ,

ನನಗೆ ತಿಳಿಯದ
ನನ್ನ ಮದುವೆಯ ಮಾತು
ಅವನ ಕಿವಿಗೆ ಬಿದ್ದವೊಡನೇ
ಬಾಲ್ಯದ ಸ್ನೇಹವ
ಮನಸ್ಸಿನ ಪ್ರೀತಿಯ
ಮೌನವಾಗಿ ಮರೆತು
ಕಣ್ಣಿಗೆ ಕಾಣದಂತೆ
ಮರೆಯಾಗಿ ಹೋಗಿದ್ದ

ನನ್ನ ಹುಡುಗ(?)….

July 21, 2008

ನಿಹಾರಿಕಾ

Filed under: ಕಥೆ — kavya gowda @ 12:04 pm
ಪ್ರೀತಿಸಿಯೆ, ಎಲ್ಲರ ಒಪ್ಪಿಗೆ ಪಡೆದೇ ಮದುವೆಯಾಗಿದ್ದರು ಆ ದಂಪತಿಗಳು .ಆದರೆ ಇಬ್ಬರಲ್ಲೂ ಏನೂ ಕೊರತೆ. ಇಬ್ಬರೂ ಸಂತೋಷವಾಗಿರಲಿಲ್ಲ ,ಕಾರಣ ಇಬ್ಬರಿಗೂ ಹೊಂದಾಣಿಕೆ ಎನ್ನುವುದೇ ಗೊತ್ತಿರಲಿಲ್ಲ. ಚಿಕ್ಕಪುಟ್ಟದ್ದಕ್ಕೂ ಜಗಳ , ಕಿತ್ತಾಟ. ಅವ ಹೇಳಿದ್ದು ಅವಳು ಒಪ್ಪಳು ,ಅವಳು ಹೇಳಿದ್ದು ಅವನು ಕೇಳನು. ಮನೆಯಲ್ಲಿ ಯಾವಾಗಲು ಕಿರಿಕಿರಿ . ಬಡವರೇನಲ್ಲ , ಶ್ರೀಮಂತರೇ . ನೋಡುವವರಿಗೆಲ್ಲ ಇವರ ಸಂಸಾರ ಒಂದು ವಿಚಿತ್ರ ಸಂಸಾರ.ಹೀಗೆ ಒಂದೆರಡು ವರುಷಗಳ ಕಳೆದ ನಂತರ ಇವರಿಗೊಂದು ಮುದ್ದಾದ ಹೆಣ್ಣು ಮಗು .ಹೆಸರು ನಿಹಾರಿಕಾ. ಗಂಡ ಹೆಂಡತಿಯಲ್ಲಿ ಜಗಳ ಕಿತ್ತಾಟವಿದ್ದರು ಮಗಳನ್ನು ಮುದ್ದಾಗಿಯೇ ಬೆಳೆಸಿದರು.ಒಳ್ಳೆಯ  ವಿದ್ಯಾಭ್ಯಾಸವನ್ನೂ ಕೊಡಿಸಿದರು. 
ಆದರೆ  ಬೆಳೆಯುತಿದ್ದ ನಿಹಾರಿಕಳಿಗೆ  ಅಪ್ಪ ಅಮ್ಮನ ನಡವಳಿಕೆ  ಜಗಳ ಬೇಸರ ತರಿಸತೊಡಗಿತ್ತು. ದಿನ ದಿನ ಚಿಕ್ಕಪುಟ್ಟದ್ದಕ್ಕೂ ಕಿತ್ತಾಡುವುದನ್ನ ರೇಗಾಡುವುದನ್ನ ನೋಡಿ ನೋಡಿ ಸಾಕಾಗಿ ಹೋಗಿತ್ತು .ಅವರು ಎಷ್ಟೇ ಪ್ರೀತಿಯಿಂದ ನೋಡಿಕೊಂಡರು ೧೦ ನೆ  ತರಗತಿ ಮುಗಿಯುತಿದ್ದಂತೆ ಮನೆಯಲ್ಲಿರುವುದಕ್ಕೆ ಬೇಸರಗೊಂಡು ಹಾಸ್ಟೆಲ್  ಸೇರಿದ್ದಳು.ಪಾಪ ಅರಿಯದ ಹುಡುಗಿ ಹಾಸ್ಟೆಲ್ ನಲ್ಲಿ ಇದ್ದ ಹುಡುಗಿಯರ ಜೊತೆ ಸೇರಿ ಕೆಟ್ಟ ಬುದ್ದಿಗಳನ್ನೆಲ್ಲ ಕಲಿಯ ತೊಡಗಿದಳು .ಕಾಲೇಜ್ ಬೇರೆ . ಕೇಳಿದಷ್ಟು ಹಣ ಮನೆಯಲ್ಲಿ ಕೊಡುತಿದ್ದರು . ಯಾವುದಕ್ಕೂ ಕೊರತೆ ಇರಲಿಲ್ಲ  .ಚೆನ್ನಾಗಿ ಓದುತಿದ್ದ ಹುಡುಗಿ ಸಿನಿಮಾ, ಹೋಟೆಲ್ ಸುತ್ತಾಟವೆಂದು ಓದುವುದನ್ನೇ ಮರೆತಿದ್ದಳು . ಅಪ್ಪ ಅಮ್ಮ ತಮ್ಮ ಅರ್ಥವಿಲ್ಲದ ಜಗಳದಲ್ಲಿ ಇದನ್ನು ಗಮನಿಸಲೇ ಇಲ್ಲ.
ಹೀಗೇ ಮತ್ತೆರಡು ವರ್ಷಗಳು  ಕಳೆದು ಹೋಗಿದ್ದವು .
ಯಾರ ಭಯವೂ ಇಲ್ಲದೆ ಬೆಳೆಯುತಿದ್ದ ನಿಹಾರಿಕಾ ತನ್ನನ್ನು ಕೇಳುವವರು ಹೇಳುವವರು ಯಾರು ಇಲ್ಲ ,ಅಪ್ಪ ಅಮ್ಮನಿಗೆ ಅವರ ಜಗಳವೇ ಹೆಚ್ಚು ಅವರು ನನ್ನ ಬಗ್ಗೆ ಕೇಳುವುದಿಲ್ಲ  ಎಂದುಕೊಂಡವಳಿಗೆ  ಹರ್ಷ ಎನ್ನುವ ಯಾವ ಕೆಲಸಕ್ಕೂ ಬಾರದ ಹುಡುಗನೊಬ್ಬನ  ಪರಿಚಯವಾಯ್ತು . ಇವರಿಬ್ಬರ ಪರಿಚಯ ಸ್ನೇಹವಾದಾಗ  ಪಾಪ  ನಿಹಾರಿಕ ಅವನನ್ನು  ಪ್ರೀತಿಸ ತೊಡಗಿದಳು .ಅವನೂ ಪ್ರೀತಿಸಿದ್ದ  ಆದರೆ ಅವಳನ್ನಲ್ಲ  , ಬೇಕು  ಬೇಕಾದ ಹಾಗೆ ಖರ್ಚು ಮಾಡುತಿದ್ದ ಇವಳ ಹಣವನ್ನು  ಮಾತ್ರ ಪ್ರೀತಿಸಿದ್ದ .ಪಾಪ ಇದು ಆ ಹುಡುಗಿಗೆ ತಿಳಿಯದಾಗಿತ್ತು. ಇವಳ ಪ್ರೀತಿಯ ವಿಷಯ ಅಪ್ಪ ಅಮ್ಮನಿಗೆ ತಿಳಿಯಲೇ ಇಲ್ಲ . ಅವರ ಜಗಳಗಳು ಮುಗಿಯದೆ ಹಾಗೆ ಸಾಗುತಿತ್ತು .
ಹರ್ಷನೊಂದಿಗಿನ ಸುತ್ತಾಟ ಹೆಚ್ಚಾಗತೊಡಗಿತು . ನಿಹರಿಕಳ  ಓದು ನಿಂತೇ ಹೋಗಿತ್ತು .  ಜೊತೆಗಿದ್ದ ಗೆಳತಿಯರೆಲ್ಲ ದೂರಾಗಿದ್ದರು .ಹೀಗೆ  ಯಾರ ಭಯವೂ ಇಲ್ಲದೆ ಹರ್ಷ ನೊಡನೆ  ಸುತ್ತಾಡುವುದನ್ನು  ನೋಡಿದ ಯಾರೋ ಊರಿನ ಪರಿಚಯದ ಸ್ನೇಹಿತರು ಇವಳ ಸುತ್ತಾಟವನ್ನು ನೋಡಿ ಅಪ್ಪ ಅಮ್ಮನಿಗೆ ವಿಷಯವನ್ನ ತಿಳಿಸಿದ್ದರು.ವಿಷಯ ತಿಳಿದ ಅಪ್ಪ -ಅಮ್ಮ ಕೋಪಗೊಂಡರೆ ಹೊರತು ಅವರ ತಪ್ಪು ಅವರು ಅರಿಯಲೇ ಇಲ್ಲ . ಇದಾದ ಮೇಲೂ ಅವರಿಬ್ಬರ ಜಗಳ ಕಿತ್ತಾಟ ನಿಲ್ಲಲಿಲ್ಲ. ಒಬ್ಬರ ನೊಬ್ಬರು ದೂರಿಕೊಳ್ಳುವುದು ಇನ್ನೊ ಹೆಚ್ಚಾಗಿತ್ತು. ನಿಹಾರಿಕಳನ್ನು  ಹಾಸ್ಟೆಲ್ ನಿಂದ  ಬಿಡಿಸಿ ಕರೆದು ಕೊಂಡು ಬಂದು ಮನೆಯಲ್ಲಿ ಕೂಡಿ ಹಾಕಿದ್ದು ಆಯಿತು. ಪಾಪ ಮನೆಯಲ್ಲಿ ನಿಹಾರಿಕಳಿಗೆ ಹುಚ್ಚು ಹಿಡಿಯುವ ಹಾಗಾಗ ತೊಡಗಿತು .ಅಪ್ಪ ಅಮ್ಮ ಅವಳಿಗೆ ಬುದ್ಡಿ ಹೇಳುವುದ ಬಿಟ್ಟು ಈ ವಿಷಯವಾಗಿ ಜಗಳಗಳನ್ನು ಹೆಚ್ಚು ಮಾಡ ತೊಡಗಿದಾಗ ಪಾಪ ಹುಡುಗಿ ಮನೆ ಬಿಟ್ಟು ಹರ್ಷನೊಂದಿಗೆ ಹೋಗುವ ನಿರ್ಧಾರ ಮಾಡಿ  ವಿಷಯವನ್ನು ಹರ್ಷನಿಗೆ  ಹೇಳಿದಾಗ ಅವನೂ ಒಪ್ಪಿದ್ದ .
ಹರ್ಷ ಕೂಡಾ ಇದೆ  ಸಮಯಕ್ಕಾಗಿ ಕಾಯುತಿದ್ದನೆಂಬ ಸತ್ಯ  ಪಾಪ ಅವಳಿಗೆ ಹೊಳೆಯಲೇ ಇಲ್ಲ . ಇದೆ ಸಮಯಕ್ಕಾಗಿ  ಕಾದಿದ್ದ ಹರ್ಷ ನಿಹಾರಿಕಳ ಮನವೊಲಿಸಿ ಮನೆಯಿಂದ ಹಣ ಒಡವೆಗಳನೆಲ್ಲ ತೆಗೆದುಕೊಂಡು ಬರುವಂತೆ  ಹೇಳಿದ. ಹುಚ್ಚು ಹುಡುಗಿ , ಮನೆಯಿಂದ ದೂರಾಗುವ ಯೋಚನೆಯಲ್ಲಿ ತನ್ನ ಕೈಗೆ ಸಿಕ್ಕ ಒಡವೆ ಹಣ ಎಲ್ಲ ತೆಗೆದುಕೊಂಡು ಮುಂದಿನ ಅನಾಹುತಗಳನ್ನು ಯೋಚಿಸದೇ ಅವನೊಂದಿಗೆ ಮನೆ ಬಿಟ್ಟು ಓಡಿ ಬಂದಿದ್ದಳು.ಅಪ್ಪ ಅಮ್ಮನನ್ನು  ತೊರೆದಿದ್ದಳು .
ನಿಹಾರಿಕಳ   ತಂದೆ ತಾಯಿಗೆ  ಏನಾಯ್ತು  ಎಂದು  ತಿಲಿಯುವುದರವೊಳಗೆ  ನಿಹಾರಿಕ ಅವರಿಂದ , ಅವರ ಮನೆಯಿಂದ ದೂರ ಹೋಗಿದ್ದಳು .ಎಲ್ಲ ಕಡೆ  ಹುಡುಕಿದರೂ ಹುಡುಕಿಸಿದರೂ  ನಿಹಾರಿಕ ಸಿಗದಾಗಿದ್ದಳು . ಕೊನೆಗೆ ಏನು ಮಾಡುವುದೆಂದು ತಿಳಿಯದ ಅಪ್ಪ ಅಮ್ಮ ಪೋಲಿಸ್ ನವರಿಗೂ ದೂರನ್ನು ಕೊಟ್ಟಿದ್ದರು.ಪೋಲಿಸ್ ನವರು ಅವರ ಕೆಲಸ ಅವರು ಮಾಡುತಿದ್ದರು .  ಪಾಪ ಅಪ್ಪ ಅಮ್ಮನಿಗೆ ತಮ್ಮ ತಪ್ಪಿನ ಅರಿವಾಗಿತ್ತು . ನಿಹಾರಿಕಳ ಈ ತಪ್ಪು ನಿರ್ದಾರಕ್ಕೆ ತಾವೇ ಕಾರಣ ಎನ್ನುವ ಸತ್ಯ ಇಬ್ಬರಿಗೂ ತಿಳಿದಿತ್ತು . ತಮ್ಮ ತಪ್ಪಿನ ಅರಿವಾಗಿ ತಪ್ಪನ್ನು ತಿದ್ದಿಕೊಂಡು ಒಬ್ಬರ  ದುಃಖಕ್ಕೆ  ಒಬ್ಬರಾದರೆ   ಪಾಪ  ಏನೂ  ಅರಿಯದೇ ತಪ್ಪು ಮಾಡಿದ ನಿಹಾರಿಕಾ ,
ಅವಳು ಮಾಡಿದ್ದೂ ತಪ್ಪು ಎಂದು ಅರಿವಾಗುವಷ್ಟರಲ್ಲಿ ಹರ್ಷ ಅವಳಿಗೆ ಮೋಸ  ಮಾಡಿ ಅವಳನ್ನು ಬಿಟ್ಟು ಹೋಗಿದ್ದ. ಪ್ರಾಣ ಕಿಂತ  ಹೆಚ್ಚಾಗಿ ಪ್ರೀತಿಸಿದ  ಹರ್ಷ ಮೋಸ , ಚಿಕ್ಕ ವಯಸ್ಸಿನ ಅವಳು ಒಂಟಿಯಾಗಿ ಜೀವನ ನಡೆಸಲಾಗದ ಅಸಹಾಯಕತೆ , ಮನೆಯ ಪರಿಸ್ಥಿತಿ  ಇವೆಲ್ಲವನ್ನೂ ಯೋಚಿಸಿದ ನಿಹಾರಿಕ  ತಂದೆ ತಾಯಿಗೆ ಮುಖವನ್ನು ತೋರಿಸುವ ಮನಸಿಲ್ಲದೇ ಆತ್ಮಹತ್ಯೆ ಮಾಡಿಕೊಂಡು ಅನಂತದೆಡೆಗೆ  ಪ್ರಯಾಣ ಬೆಳೆಸಿ ನಿಹಾರಿಕೆಯಾದಳು .

July 17, 2008

ಕನಸು

————-
ಚಿಂತೆಯಲ್ಲಿರುವ ಜೀವಕ್ಕೆ
ಚಿಂತೆಗಳ ಹೆಚ್ಚಿಸಿ
ಪ್ರೀತಿಸುವವರ ಪ್ರೀತಿಯನು
ಅವರಿಗರಿಯದೆ ನೋಯಿಸಿ
ದಣಿದ ಜೀವಗಳು
ಬೆಚ್ಚಿ ಹೆದರುವಂತೆ ಮಾಡಿ
ನಮಗರಿಯದೆ ನಮ್ಮ ನಗಿಸಿ
ಅಳುವಂತೆ ಮಾಡಿ ಹಿಂಸಿಸಿ
ಏನಾಯ್ತೆಂದು ಅರಿಯುವುದರೊಳಗೆ 
ಮಿಂಚಿನಂತೆ ಮರೆಯಾಗಿ 
ಯೋಚಿಸುವಂತೆ ಮಾಡಿ 
ಏನನೋ  ಗೆದ್ದ  ಹೆಮ್ಮೆಯಲಿ
ತಾನು ಸಂತಸವಾಗಿ
ನಾಳೆ ಮತ್ತೆ ಬರುವೆ ಎನ್ನುವವಳು .
———————  
Next Page »

Blog at WordPress.com.